Skip to main content

ಮೇಕಪ್ ಬೇಕೆ.....?

ನೀವು, ಈಸ್ಟ್ ಮನ್ ಕಲರ್ ಸಿನೆಮಾಗಳನ್ನು ನೋಡಿರಬಹುದು.ಪಾತ್ರಧಾರಿಗಳ ವೇಷ-ಭೂಷಣ,ಸೆಟ್ಟು ಎಲ್ಲವೂ ತುಂಬ ರಂಗು ರಂಗು.ಪಾತ್ರಧಾರಿಗಳ ಮೇಕಪ್ ಅಂತೂ,ಎಳೆಯ ಮಕ್ಕಳು ಮುಖ-ಮೈ-ಕೈಗೆಲ್ಲ ಬಣ್ಣ ಬಳಿದುಕೊಂಡಂತೆ.ಇದಕ್ಕೆ ಕಾರಣವೆನೆಂದರೆ ಬಹುತೇಕ ನಿರ್ದೇಶಕರು, ಕಲಾವಿದರು,ಮೇಕಪ್ ಮ್ಯಾನ್ಸ್,ಕಪ್ಪು-ಬಿಳುಪ್ಪು ಮತ್ತು ಈಸ್ಟ್ ಮನ್ ಕಲರ್ ನಡುವಿನ ಸೂಕ್ಷ್ಮತೆ ಅರಿಯದೇ ಹೋಗಿದ್ದು.ಕಪ್ಪು-ಬಿಳುಪ್ಪು ಕಾಲದ ಮೇಕಪ್ ರಂಗು,ಪ್ರೇಕ್ಷಕರಿಗೆ ರಾಚುತ್ತಿರಲಿಲ್ಲ.ಈ ಮೇಕಪ್ ಮತ್ತು ಆಗ ಬಳಸಿತ್ತಿದ್ದ ಲೈಟ್ಸ್ ಗಳಿಗೂ ಮ್ಯಾಚ್ ಆಗಿ ಕಲಾವಿದರು ಸುಂದರವಾಗಿಯೇ ಕಾಣುತ್ತಿದ್ದರು.ಈ ಮ್ಯಾಚಿಂಗ್ ಅನ್ನೇ ಈಸ್ಟ್ ಮನ್ ಕಲರ್ ನಲ್ಲಿಯೂ ಬಯಸಿದ್ದರಿಂದ ರಂಗು ಅಗತ್ಯಕ್ಕಿಂತಲೂ ಹೆಚ್ಚಾಗಿತ್ತು.ಇದರಲ್ಲಿ ಕಲಾವಿದರ ಭಾವಾಭಿವ್ಯಕ್ತಿ,  ಸೂಕ್ಷ್ಮತೆ ಮರೆಯಾಗಿತ್ತು.
ಈಸ್ಟ್ ಮನ್ ನಂತರ ಟೆಕ್ನಿ ಕಲರ್ ಸಿನೆಮಾ ಬಂತು.ಆಗಲೂ ಮೇಕಪ್ ತೀವ್ರತೆ ಕಡಿಮೆಯಾಗಲಿಲ್ಲ.ಕಪ್ಪು-ಬಿಳುಪು ಮತ್ತು ಈಸ್ಟ್ ಮನ್ ಹಂತಗಳಿಗಿಂತಲೂ ಸೂಕ್ಷ್ಮ ಕ್ಯಾಮರಾಗಳು ಬಂದರೂ ಇವುಗಳನ್ನು ನೆರಳು-ಬೆಳಕು ಸಂಯೋಜನೆಯಲ್ಲಿ ಸಮರ್ಥವಾಗಿ ಬಳಸಿಕೊಂಡವರು ಕೆಲವರು ಮಾತ್ರ.ಇಂಥವರ ಸಿನೆಮಾಗಳಲ್ಲಿ ಮಾತ್ರ ಮೇಕಪ್ ಸಮಂಜಸ ಎನ್ನುವ ರೀತಿಯಲ್ಲಿತ್ತು.ನಂತರ ಆರ್.ಬಿ.ತದನಂತರ ಆರ್.ಜಿ.ಬಿ.ಕಲರ್ ಮತ್ತು ಶಕ್ತಿಶಾಲಿ ಕ್ಯಾಮರಾ ಮತ್ತು ಲೆನ್ಸ್ ಗಳ ಹಂತದಲ್ಲಿ ಮೇಕಪ್ ಗೊಡವೆ ಬೇಡ ಎಂದು ನಿರ್ಧರಿಸಿದವರು ಬೆರಳೆಣಿಕೆಯಷ್ಟು ನಿರ್ದೇಶಕರು ಮಾತ್ರ.ಆದರೆ ಇಂಥವರ ಬಹುತೇಕ ಸಿನೆಮಾಗಳು ಕಲಾತ್ಮಕ ಎಂಬ ಹಣೆಪಟ್ಟಿಗೆ ಪಾತ್ರ.ಆದ್ದರಿಂದ ಈ ಸಿನೆಮಾಗಳು ಸಾಮಾನ್ಯ ಜನರ ನೋಡುವಿಕೆಯಿಂದ ದೂರ ಉಳಿದವು.
ಎಂಬತ್ತರ ದಶಕದಿಂದಿಚೆಗೆ ಭಾರತದಲ್ಲಿ ಟೆಲಿವಿಷನ್ ವಿಸ್ತರಣೆ ಯುಗ ಆರಂಭ.ಟೆಲಿವಿಷನ್ ಒಳಾಂಗಣ ಚಿತ್ರೀಕರಣ ಸಂದರ್ಭಗಳಲ್ಲಿಯೂ ಮೇಕಪ್ ತೀವ್ರತೆ ಕಡಿಮೆಯಾಗಲಿಲ್ಲ.ಸುದ್ದಿವಾಚಕ ವಾಚಕಿಯರ ಮೇಕಪ್ ಮತ್ತಷ್ಟು ಹೆಚ್ಚು.ಎಂಬತ್ತರ ದಶಕದ ಕ್ಯಾಮರಾಗಳಿಗೂ,ಪ್ರಸ್ತುತದ ಕ್ಯಾಮರಾ ಮತ್ತು ಬಗೆಬಗೆಯ ಲೇನ್ಸ್ ಗಳ ಸಾಮರ್ಥ್ಯದಲ್ಲಿ ಭಾರಿ ವ್ಯತ್ಯಾಸ.ಇಂದು ಅತಿಶಕ್ತಿಶಾಲಿ ಕ್ಯಾಮರಾಗಳಿವೆ.ನ್ಯೂಸ್ ರೀಡಿಂಗ್ ಸ್ಟುಡಿಯೋಗಳಿಗಷ್ಟೇ ಅನ್ವಯಿಸಿ ನೋಡಿದರೂ ಈ ಕ್ಯಾಮರಾಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.ಏಕೆಂದರೆ ಬಹುತೇಕ ಟೆಲಿವಿಷನ್ ನ್ಯೂಸ್ ಸ್ಟುಡಿಯೋಗಳ ಬೆಳಕಿನ ಸಂಯೋಜನೆ ರೀತಿಯೇ ಅಸಮರ್ಪಕ. ಪ್ರಖರ ಲೈಟ್ಸ್ ಗಳನ್ನೇ ಬಳಸಲಾಗುತ್ತಿದೆ.

ಪ್ರಖರ ಲೈಟಿನಲ್ಲಿ ಚಾಲನೆಯಲ್ಲಿರುವ ಕ್ಯಾಮರಾ ಮುಂದಿರುವವರು ಡಲ್ಲ್ ಆಗಿರುತ್ತಾರೆ.ಇಂಥ ಸಂದರ್ಭದಲ್ಲಿ ಸಮರ್ಥ ಮೇಕಪ್ ಈ ಡಲ್ಲ್ ನೆಸ್ ಅನ್ನು ಕಡಿಮೆಮಾಡಬಲ್ಲುದು.ಆದರೆ ಮೇಕಪ್ ಅವಶ್ಯಕತೆಗಿಂತಲೂ ಹೆಚ್ಚಾಗಿರುತ್ತದೆ.ಕ್ಯಾಮರಾ ಸಾಮರ್ಥ್ಯ,ಲೈಟಿಂಗ್ಸ್ ಮತ್ತು ಸುದ್ದಿವಾಚಕರ ಮೇಕಪ್ ಪರಸ್ಪರ ಸಂಯೋಜಿತವಾಗದೇ ಔಟ್ ಪುಟ್ ನಲ್ಲಿ ಸ್ಕಿನ್ ಟೋನ್ ಕಾಣೆಯಾಗಿರುತ್ತದೆ.ಈ ಚಿತ್ರ ನೋಡುವಿಕೆಗೆ ಹಿತವಾಗಿರುವುದಿಲ್ಲ.ಓವರ್ ಮೇಕಪ್ ಅನ್ನಿಸುತ್ತಿರುತ್ತದೆ.ವಾಚಕ-ವಾಚಕಿಯರ ಸೌಂದರ್ಯ ಕಾಣೆಯಾಗುರುತ್ತದೆ. ನಿರೂಪಕರ ಜೊತೆ ಒಬ್ಬರಿಗಿಂತ ಹೆಚ್ಚು ಅತಿಥಿಗಳು ಇದ್ದಾಗ ಒಟ್ಟಾರೆ ಚಿತ್ರ ಮತ್ತಷ್ಟು ಅಧ್ವಾನವಾಗಿರುತ್ತದೆ.ಇವರ ಚರ್ಮದ ಕಲರ್ ಬೇರೆ ಬೇರೆಯಾಗಿರುವುದರಿಂದ ಇವರೆಲ್ಲರಿಗೂ ಸೂಕ್ತವಾಗುವ ರೀತಿಯಲ್ಲಿ ಸ್ಟುಡಿಯೋ ಲೈಟಿಂಗ್ಸ್ ಹೊಂದಾಣಿಕೆ ಮಾಡುವುದು ಕಷ್ಟ.ಇಂಥ ಸಂದರ್ಭದಲ್ಲಿ ಕ್ಯಾಮರಾದ ಔಟ್ ಪುಟ್ ಚೆನ್ನ ಅನ್ನಿಸುವುದಿಲ್ಲ
ಸುದ್ದಿವಾಚಕ,ವಾಚಕಿಯರಿಗೆ ಮೇಕಪ್ ಮಾಡಿರದಿದ್ದರೂ ಕ್ಯಾಮರಾ ಔಟ್ ಪುಟ್ ಅನ್ನು ಹಿತವಾಗಿ ತೋರಿಸುವುದು ಸಾಧ್ಯ.ಪ್ರಖರ ಲೈಟಿಂಗ್ಸ್ ಬದಲು ಕೂಲ್ ಲೈಟ್ಸ್ ಮತ್ತು ಬೇಬಿ ಬಳಸಬೇಕು.ಒಳಾಂಗಣದ ಕಲರ್ ಕೂಡ ಲೈಟಿಂಗ್ ಅಬ್ಸರ್ವ್ ಮಾಡುವಂತಿರಬಾರದು.ಒಂದು ವೇಳೆ ಮೇಕಪ್ ಬೇಕೇಬೇಕು ಎನ್ನುವಂಥ ಸಂದರ್ಭವಿದ್ದರೆ ಬೇಸ್ ಸಾಕು.ಬೇಸ್ ನ ಚೌಕಟ್ಟು,ಸಮರ್ಥ ಮೇಕಪ್ ಮ್ಯಾನಿಗೆ ತಿಳಿದಿರುತ್ತದೆ.

Comments

  1. ತುಂಬಾ ಚೆನ್ನಾಗಿದೆ ಈ ಮಾಹಿತಿಯೆಲ್ಲಾ ಹೇಗೆ ಕಲೆ ಹಾಕ್ತೀರಾ?

    ReplyDelete
  2. ಮೇಕಪ್ ಕುರಿತು ಪಕ್ಕಾ ಮಾಹಿತಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಸರ್.
    ಆಗಾಗ ನನ್ನ ಬ್ಲಾಗಿಗೆ ಭೇಟಿ ನೀಡುತ್ತಿರುವುದಕ್ಕೆ ತುಂಬಾನೇ ಥ್ಯಾಂಕ್ಸ್..ಸದಾ ಬರುತ್ತಿರಿ
    -ಚಿತ್ರಾ

    ReplyDelete

Post a Comment

Popular posts from this blog

ಹೆಣ್ಣೆ, ನಿನ್ನ ಮತ್ತೊಂದು ಹೆಸರು ಚಂಚಲತೆಯೆ............?

'ಸನ್ ಮ್ಯೂಸಿಕ್' ವಾಹಿನಿಯಲ್ಲಿ 'ವಿನ್ನೈತಾಂಡಿ ವರುವಯ' ಚಿತ್ರದ ಹಾಡುಗಳು ಜನಪ್ರಿಯ. ಇವುಗಳನ್ನು ಆಗಾಗ ನೋಡುತ್ತಿದ್ದೆನಾದರೂ ಚಿತ್ರ ವೀಕ್ಷಿಸಿರಲಿಲ್ಲ.  ಮೊನ್ನೆ  ಈ ಚಿತ್ರದ ಡಿವಿಡಿ  ತಂದು ನೋಡಿದೆ. ಮೊದಲಿಗೆ ಇಡೀ ಚಿತ್ರದ ವ್ಯಾಕರಣ ಹೊಸತನವಿದೆ ಎನಿಸಿತು. ಇಡೀ ಚಿತ್ರವನ್ನು ಪ್ರೆಸೆಂಟ್ ಮಾಡಿರುವ ರೀತಿ ಬಗ್ಗೆ ಮೆಚ್ಚುಗೆ ಮೂಡಿತು. ಇವೆಲ್ಲದರ ಜೊತೆಗೆ ಕಥೆಯ ಹೂರಣ ಕೂಡ ವಿಭಿನ್ನವಾಗಿದೆ. ಫ್ಲಾಷ್ ಬ್ಯಾಕಿನ ಮೂಲಕ ಇಡೀ ಸ್ಟೋರಿಯನ್ನು ಕಥಾ ನಾಯಕ ನಿರೂಪಿಸುತ್ತಾ ಹೋಗುತ್ತಾನೆ. ಕಥಾ ನಾಯಕ ಕಾರ್ತಿಕ್ (ಸಿಂಬರಸನ್) ಇಂಜಿನಿಯರ್. ಆದರೀತನಿಗೆ ಸಿನೆಮಾ ಬಗ್ಗೆ ತೀವ್ರ ಆಸಕ್ತಿ. ಸ್ನೇಹಿತರ ಮೂಲಕ ಪರಿಚಯವಾದ  ಸಿನಿಮಾ ಕ್ಯಾಮರಾಮನ್ ಗಣೇಶ್(ಗಣೇಶ್) ತಮ್ಮ ಪ್ರಭಾವ ಬಳಸಿ ಖ್ಯಾತ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಸೇರಿಸುತ್ತಾರೆ. ಒಮ್ಮೆ ತಾವಿರುವ ಬಾಡಿಗೆ ಮನೆ ಗೇಟಿನ ಬಳಿ ಕಾರ್ತೀಕ್ ನಿಂತಿದ್ದಾಗ ಸೀರೆಯುಟ್ಟ ಯುವತಿಯೋರ್ವಳು ತೀರಾ ಬೇಗವೂ ಅಲ್ಲದ ನಿಧಾನವೂ ಅಲ್ಲದ ರೀತಿ ನಡೆದು ಬರುತ್ತಿರುವುದನ್ನು ನೋಡುತ್ತಾನೆ. ನೋಡುತ್ತಾ ನೋಡುತ್ತಾ ಈತನ ಕಣ್ಣುಗಳಲ್ಲಿ ಮಿಂಚು. 'love at first sight' ಭಾವನೆ. ಆಕೆ ಗೇಟ್ ತೆರೆದು ಈತನಿರುವ ಮನೆಯ ಮೊದಲ ಮಹಡಿಗೆ ತೆರಳುತ್ತಾನೆ. ಬಳಿಕ ಈತನ ಸಹೋದರಿ ಮೂಲಕ ಆಕೆ, ಮಲೆಯಾಳಿ ಮನೆ ಮಾಲೀಕರ ಮಗಳು ಜೆಸ್ಸಿ (ತ್ರಿಷಾ) ಎನ್ನುವುದು ತಿಳಿದು ಬರುತ್ತದೆ.

ಕಾಸರಗೋಡು ಕನ್ನಡಿಗರ ಹೋರಾಟ ಮತ್ತು ಬಲಿದಾನಗಳನ್ನು ಕರ್ನಾಟಕ ಸರ್ಕಾರ ಮರೆತಿದೆಯೇ...?

" ಕಾಸರಗೋಡು, ಕರ್ನಾಟಕದ ಕನ್ಯಾಕುಮಾರಿ. ಉತ್ತರದಲ್ಲಿ ಬೆಳಗಾವಿ, ಬಳ್ಳಾರಿಗಳಂತೆ ದಕ್ಷಿಣ ಕನ್ನಡದಲ್ಲಿ ನಮ್ಮದು ಕರ್ನಾಟಕದ ಕನ್ಯಾಕುಮಾರಿ. ಕನ್ನಡನಾಡಿನ ಈ ತೆಂಕಣ ಬಾಗಿಲನ್ನು ತೆರೆದಿಟ್ಟು ಕನ್ನಡಿಗರು ಎಚ್ಚರತಪ್ಪಿ ನಿದ್ರೆ ಹೋದುದ್ದೇ ಆದರೆ ನಮ್ಮ ಜನರಿಗೂ, ನಮ್ಮ ನಾಡಿಗೂ ಅಮೂಲ್ಯವಾದ ಕನ್ನಡ ಸಂಸ್ಕೃತಿಗೂ ಪ್ರಮಾದ ಒದಗುವುದರಲ್ಲಿ ಸಂಶಯವಿಲ್ಲ. ವಿಶಾಲ ಕೇರಳ ಚಳವಳಿಯು ಆರಂಭವಾಗಿ ಹತ್ತು ವರ್ಷಗಳು ಸಂದುಹೋದವು. ದಕ್ಷಿಣ ಕನ್ನಡ, ಕೊಡಗು, ನೀಲಗಿರಿ ಜಿಲ್ಲೆಗಳು ಮಲಬಾರಿನೊಂದಿಗೆ ಜತೆಗೊಂಡು ಕೇರಳ ಸಂಸ್ಥಾನ ಅಥವಾ ಪಶ್ಚಿಮ ಪ್ರಾಂತ ಸಂಸ್ಥಾನವೊಂದು ನಿರ್ಮಾಣವಾಗಬೇಕೆಂದು ಈ ಚಳವಳಿಯು ಪ್ರಬಲವಾಗುತ್ತಾ ನಡೆದಿದೆ. ಈ ಚಳವಳಿಯ ಮರ್ಮವನ್ನು ತಿಳಿದುಕೊಂಡು ಕನ್ನಡಿಗರು ಅದನ್ನು ಸಕಾಲದಲ್ಲಿಯೇ ಪ್ರತಿಭಟಿಸದೇ ಹೋದರೆ ಸ್ವಲ್ಪಕಾಲದೊಳಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡಾದರೂ ಮಲಬಾರಿನವರ ಮಡಿಲಿಗೆ ಬೀಳಬೇಕಾಗಬಹುದು" ¨sÁµÁªÁgÀÄ ¥ÁæAvÀå gÀZÀ£ÉAiÀiÁUÀĪÀÅzÀPÀÆÌ MA¨sÀvÀÄÛ ªÀµÀðUÀ½UÀÆ ªÉÆzÀ¯Éà ²æÃzsÀgÀ PÀQ̯ÁAiÀÄgÀÄ ºÉýzÀÝ RavÀ C©ü¥ÁæAiÀÄ«zÀÄ. EªÀgÀÄ PÁ¸ÀgÀUÉÆÃr£À ¸ÀÄ¥Àæ¹zÀÞ ªÀQîgÁVzÀÝgÀÄ. PÁ¸ÀgÀUÉÆÃqÀ£ÀÄß PÀ£ÁðlPÀPÉÌ ¸ÉÃ¥ÀðqÉUÉƽ¸À®Ä ¸ÀvÀvÀ 25 ªÀµÀð ºÉÆÃgÁl ªÀiÁrzÀgÀÄ. CªÀgÀ fëvÁªÀ¢üAiÀĪÀgÉUÀÆ F ºÉÆÃgÁlzÀ°è ¸ÀQæAiÀÄgÁVzÀÝgÀÄ. 1947g

ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ…!?

ಶೀರ್ಷಿಕೆ ಓದಿದಾಗ ಆಶ್ವರ್ಯ-ಪ್ರಶ್ನಾರ್ಥಕ ಭಾವಗಳು ಮೂಡುವುದು ಸಹಜ. ಆದರೆ ‘ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ ಎನ್ನುವುದು ಅಕ್ಷರಶಃ ಸತ್ಯ. ಗಡಿ ಅಂಚಿನ ಕಾಸರಗೋಡಿನಿಂದ ಕನ್ನಡಕ್ಕೆ ಸ್ಥಾನವೇ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಆ ಸರಕಾರ ನಾನಾ ಬಗೆಯ ತಂತ್ರಗಾರಿಕೆಯನ್ನು ಮಾಡುತ್ತಲೇ ಬಂದಿದೆ. ಭಾಷಾವಾರು ಪ್ರಾಂತ್ಯ ರಚನೆಯಾಗಿ 54 ವರ್ಷ ಸಂದರೂ ಕಾಸರಗೋಡಿನಲ್ಲಿ ಕನ್ನಡ ಉಳಿದಿರುವುದನ್ನು ಕಂಡು ಈ ಬಾರಿ ಪ್ರಬಲ ಅಸ್ತ್ತ ಪ್ರಯೋಗಿಸಿದೆ. ಇದಕ್ಕೆ ತಕ್ಕ ಪ್ರತ್ಯಸ್ತ್ರ ಹೂಡದೇ ಇದ್ದರೆ ಸಂಭವಿಸುವ ಅಪಾಯಗಳು ಅನೇಕ. ಅವುಗಳೇನು…..? ಬದಿಯಡ್ಕ ಶಾಲಾ ಮಕ್ಕಳು   2011ರ ಜುಲೈ 8 ರಿಂದ 17ರವರೆಗೆ ಕೇರಳದಲ್ಲಿನ ಕನ್ನಡ ಪ್ರಾಂತ್ಯಗಳಾದ ಕಾಸರಗೋಡು-ಹೊಸದುರ್ಗಗಳಲ್ಲಿ ಕ್ಷೇತ್ರ ಪ್ರವಾಸದಲ್ಲಿದ್ದೆ. ಎಂದಿನಂತೆ ಕನ್ನಡ ಭಾಷಾ ಚಳವಳಿಗಾರನ್ನು ಭೇಟಿಯಾದೆ. ‘ಕನ್ನಡಕ್ಕೆ ಭಾರಿ ಅಪಾಯ ತಂದೊಡ್ಡುವ ಕ್ರಮವನ್ನು ಕೇರಳ ಸರಕಾರ ಜರುಗಿಸಿದೆ. ಇದರಿಂದ ಕಾಸರಗೋಡಿನ ಕನ್ನಡದ ಕತ್ತು ಹಿಚುಕಿದಂತಾಗುತ್ತದೆ. ಕೆಲವೇ ವರ್ಷಗಳಲ್ಲಿ ಇಲ್ಲಿನ ಕನ್ನಡ ಸಂಸ್ಕೃತಿ ಕಣ್ಮರೆಯಾಗಲಿದೆ ಎಂಬ ಆತಂಕವನ್ನು ಮುಳ್ಳೇರಿಯಾದ ಆಯುರ್ವೇದ ವೈದ್ಯ ನರೇಶ್ ಮತ್ತು ಕಾಸರಗೋಡಿನ ಸರಕಾರಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ರತ್ನಕರ ಮಲ್ಲಮೂಲೆ ಅವರು ವ್ಯಕ್ತಪಡಿಸಿದರು.  ಕನ್ನಡ ಭಾಷಾ ಶಾಲೆಗಳಲ್ಲಿ 10ನೇ ತರಗತಿವರೆಗೆ ಎರಡನೇ ಭಾಷೆಯಾಗಿ ಮಲೆಯಾಳಂ ಕಲಿಸಬೇಕು-ಕಲಿಯಬೇಕು ಎನ