
ಭಯೋತ್ಪಾದನೆಗೆ ನಾನಾ ಆಯಾಮ.ಧರ್ಮ,ರಾಜಕೀಯ,ಆರ್ಥಿಕ,ಸಾಮಾಜಿಕ.ವೈಯಕ್ತಿಕ ಅರ್ಥ ಸಂಪಾದನೆ ತಳಹದಿ.ಇದಕ್ಕೆ ಧರ್ಮರಾಜಕಾರಣದ ಇಂಬು.ಭಯೋತ್ಪಾದನೆಯಲೀಗ ಇದರದೇ ಪ್ರಾಬಲ್ಯ.ಶತಶತಮಾನಗಳಿಂದ ಭಯೋತ್ಪಾದನೆ ಚಾಲ್ತಿಯಲ್ಲಿದೆ.ಅದರ ಸ್ವರೂಪಗಳು ವಿಭಿನ್ನ.ಆಯುಧ ವಿಜ್ಞಾನ ಪ್ರಗತಿಯಾದಂತೆಲ್ಲ ಭಯೋತ್ಪದನೆ ವಿಜೃಂಭಿಸುತ್ತಿದೆ.ಭಯೋತ್ಪಾದಕರನ್ನು ಮಟ್ಟಹಾಕುವಲ್ಲಿಯೂ ವಿಶ್ವರಾಜಕಾರಣದ ನುಸುಳುವಿಕೆ. ಭಾರತದೊಂದಿಗೆ ಜಂಟಿ ಸಮರಭ್ಯಾಸ ಮಾಡುತ್ತದೆ ಚೀನಾ. ಇದೇ ವೇಳೆ ಪಾಕಿಸ್ತಾನದ ಮೇಲಿನ ಆರೋಪಗಳಿಗೆ ಆಕ್ಷೇಪವನ್ನೂ ಎತ್ತುತ್ತದೆ.ಆಪ್ಘಾನೀಸ್ತಾನದ ಮೇಲೆ ದಂಡೇತ್ತಿ ಹೋಗುವ ಅಮೆರಿಕ ನವರಂಗಿ ಆಟವಾಡುತ್ತದೆ.ಈ ಸಂದರ್ಭದಲ್ಲಿ ಅತ್ಯುತ್ತಮ ವಿದೇಶಾಂಗ ನೀತಿ ಹೊಂದಿದ ಭಾರತ ಇದೇ ಕಾರಣಕ್ಕಾಗಿ ನಲುಗುತ್ತದೆ. ಆಗ ಭಾರತ ಒಬ್ಬಂಟಿ ಅನಿಸುತ್ತದೆ.
ಈ ಎಲ್ಲ ಯೋಜಿತ ಭಯೋತ್ಪಾದನೆ ನಡುವೆ ನಲುಗುವುದು ಶ್ರೀಸಾಮಾನ್ಯರು.ಇವರ ದನಿ ಕ್ಷೀಣ. ಶ್ರೀಸಾಮಾನ್ಯ ಭಯೋತ್ಪಾದನೆಗೆ ಸಡ್ಡು ಹೊಡೆದರೆ?ಇಂಥದೊಂದು ಪರಿಕಲ್ಪನೆ ಇಟ್ಟುಕೊಂಡು ರಚಿತವಾದ ಸಿನೆಮಾ ಎ.ವೆಡ್ನೆಸ್ ಡೆ.ನೀರಜ್ ಪಾಂಡೆ ಕಥೆ-ಚಿತ್ರಕಥೆ ರಚಿಸಿ ನಿರ್ದೆಶಿಸಿದ ಚಿತ್ರವಿದು.ಎಲ್ಲಿಯೂ ಚಿತ್ರಕಥೆ ಜಾಳು-ಜಾಳಾಗಿಲ್ಲ.ಹಿಗಾಗಿ ಚಿತ್ರದ ಟೆಂಫೋ ಏರುಗತಿಯಲ್ಲಿ ಸಾಗುತ್ತದೆ.ಅತ್ಯುತ್ತಮ ಭೂಮಿಕೆ ಸಿದ್ದಪಡಿಸುವ ಶ್ರೀಸಾಮಾನ್ಯ ಕೊನೆಕ್ಷಣದವರೆಗೂ ತನ್ನ ನಿಜ ಉದ್ದೇಶ ಬಿಟ್ಟುಕೊಡುವುದಿಲ್ಲ. ತನ್ನ ಉದ್ದೇಶಿತ ಗುರಿ ತಲುಪಲು ಶಕ್ತನಾಗುತ್ತಾನೆ.ಈ ಮೂಲಕ ಚಿತ್ರ ಸಾರ್ಥಕ ಮೇಸೆಜ್ ಪಾಸ್ ಮಾಡುತ್ತದೆ.ಇಲ್ಲಿನ ಹಿರೋ ಓರ್ವ ಪೊಲೀಸ್ ಇನ್ಸ್ ಪೆಕ್ಟರ್. ಈತನ ಹೆಸರು ಆರೀಫ್ ಖಾನ್...!
ಕುಮಾರ್ ದುರದೃಷ್ಟವಶಾತ್ ಭಾರತದ ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯನ್ನು ಈರ್ಷೆಯಿಂದ ಗಮನಿಸುತ್ತಿರುವ ಹೊಟ್ಟೆಕಿಚ್ಚಿನ ಅಮೇರಿಕಾ ಆಗಲಿ ಚೀನಾ ಆಗಲಿ ಭಯೋತ್ಪಾದನಾ ಸಮಸ್ಯೆಯನ್ನು ನಿಗ್ರಹಿಸುವಲ್ಲಿ ಮನಸಾರೆ ಸಹಾಯ ಮಾಡುತ್ತಿಲ್ಲ....
ReplyDelete