Skip to main content

ಭಯೋತ್ಪಾದನೆ ಆಯಾಮಗಳು....


ಭಯೋತ್ಪಾದನೆಗೆ ನಾನಾ ಆಯಾಮ.ಧರ್ಮ,ರಾಜಕೀಯ,ಆರ್ಥಿಕ,ಸಾಮಾಜಿಕ.ವೈಯಕ್ತಿಕ ಅರ್ಥ ಸಂಪಾದನೆ ತಳಹದಿ.ಇದಕ್ಕೆ ಧರ್ಮರಾಜಕಾರಣದ ಇಂಬು.ಭಯೋತ್ಪಾದನೆಯಲೀಗ ಇದರದೇ ಪ್ರಾಬಲ್ಯ.ಶತಶತಮಾನಗಳಿಂದ ಭಯೋತ್ಪಾದನೆ ಚಾಲ್ತಿಯಲ್ಲಿದೆ.ಅದರ ಸ್ವರೂಪಗಳು ವಿಭಿನ್ನ.ಆಯುಧ ವಿಜ್ಞಾನ ಪ್ರಗತಿಯಾದಂತೆಲ್ಲ ಭಯೋತ್ಪದನೆ ವಿಜೃಂಭಿಸುತ್ತಿದೆ.ಭಯೋತ್ಪಾದಕರನ್ನು ಮಟ್ಟಹಾಕುವಲ್ಲಿಯೂ ವಿಶ್ವರಾಜಕಾರಣದ ನುಸುಳುವಿಕೆ. ಭಾರತದೊಂದಿಗೆ ಜಂಟಿ ಸಮರಭ್ಯಾಸ ಮಾಡುತ್ತದೆ ಚೀನಾ. ಇದೇ ವೇಳೆ ಪಾಕಿಸ್ತಾನದ ಮೇಲಿನ ಆರೋಪಗಳಿಗೆ ಆಕ್ಷೇಪವನ್ನೂ ಎತ್ತುತ್ತದೆ.ಆಪ್ಘಾನೀಸ್ತಾನದ ಮೇಲೆ ದಂಡೇತ್ತಿ ಹೋಗುವ ಅಮೆರಿಕ ನವರಂಗಿ ಆಟವಾಡುತ್ತದೆ.ಈ ಸಂದರ್ಭದಲ್ಲಿ ಅತ್ಯುತ್ತಮ ವಿದೇಶಾಂಗ ನೀತಿ ಹೊಂದಿದ ಭಾರತ ಇದೇ ಕಾರಣಕ್ಕಾಗಿ ನಲುಗುತ್ತದೆ. ಆಗ ಭಾರತ ಒಬ್ಬಂಟಿ ಅನಿಸುತ್ತದೆ.

ಈ ಎಲ್ಲ ಯೋಜಿತ ಭಯೋತ್ಪಾದನೆ ನಡುವೆ ನಲುಗುವುದು ಶ್ರೀಸಾಮಾನ್ಯರು.ಇವರ ದನಿ ಕ್ಷೀಣ. ಶ್ರೀಸಾಮಾನ್ಯ ಭಯೋತ್ಪಾದನೆಗೆ ಸಡ್ಡು ಹೊಡೆದರೆ?ಇಂಥದೊಂದು ಪರಿಕಲ್ಪನೆ ಇಟ್ಟುಕೊಂಡು ರಚಿತವಾದ ಸಿನೆಮಾ ಎ.ವೆಡ್ನೆಸ್ ಡೆ.ನೀರಜ್ ಪಾಂಡೆ ಕಥೆ-ಚಿತ್ರಕಥೆ ರಚಿಸಿ ನಿರ್ದೆಶಿಸಿದ ಚಿತ್ರವಿದು.ಎಲ್ಲಿಯೂ ಚಿತ್ರಕಥೆ ಜಾಳು-ಜಾಳಾಗಿಲ್ಲ.ಹಿಗಾಗಿ ಚಿತ್ರದ ಟೆಂಫೋ ಏರುಗತಿಯಲ್ಲಿ ಸಾಗುತ್ತದೆ.ಅತ್ಯುತ್ತಮ ಭೂಮಿಕೆ ಸಿದ್ದಪಡಿಸುವ ಶ್ರೀಸಾಮಾನ್ಯ ಕೊನೆಕ್ಷಣದವರೆಗೂ ತನ್ನ ನಿಜ ಉದ್ದೇಶ ಬಿಟ್ಟುಕೊಡುವುದಿಲ್ಲ. ತನ್ನ ಉದ್ದೇಶಿತ ಗುರಿ ತಲುಪಲು ಶಕ್ತನಾಗುತ್ತಾನೆ.ಈ ಮೂಲಕ ಚಿತ್ರ ಸಾರ್ಥಕ ಮೇಸೆಜ್ ಪಾಸ್ ಮಾಡುತ್ತದೆ.ಇಲ್ಲಿನ ಹಿರೋ ಓರ್ವ ಪೊಲೀಸ್ ಇನ್ಸ್ ಪೆಕ್ಟರ್. ಈತನ ಹೆಸರು ಆರೀಫ್ ಖಾನ್...!

Comments

  1. ಕುಮಾರ್ ದುರದೃಷ್ಟವಶಾತ್ ಭಾರತದ ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯನ್ನು ಈರ್ಷೆಯಿಂದ ಗಮನಿಸುತ್ತಿರುವ ಹೊಟ್ಟೆಕಿಚ್ಚಿನ ಅಮೇರಿಕಾ ಆಗಲಿ ಚೀನಾ ಆಗಲಿ ಭಯೋತ್ಪಾದನಾ ಸಮಸ್ಯೆಯನ್ನು ನಿಗ್ರಹಿಸುವಲ್ಲಿ ಮನಸಾರೆ ಸಹಾಯ ಮಾಡುತ್ತಿಲ್ಲ....

    ReplyDelete

Post a Comment

Popular posts from this blog

ಹೆಣ್ಣೆ, ನಿನ್ನ ಮತ್ತೊಂದು ಹೆಸರು ಚಂಚಲತೆಯೆ............?

'ಸನ್ ಮ್ಯೂಸಿಕ್' ವಾಹಿನಿಯಲ್ಲಿ 'ವಿನ್ನೈತಾಂಡಿ ವರುವಯ' ಚಿತ್ರದ ಹಾಡುಗಳು ಜನಪ್ರಿಯ. ಇವುಗಳನ್ನು ಆಗಾಗ ನೋಡುತ್ತಿದ್ದೆನಾದರೂ ಚಿತ್ರ ವೀಕ್ಷಿಸಿರಲಿಲ್ಲ.  ಮೊನ್ನೆ  ಈ ಚಿತ್ರದ ಡಿವಿಡಿ  ತಂದು ನೋಡಿದೆ. ಮೊದಲಿಗೆ ಇಡೀ ಚಿತ್ರದ ವ್ಯಾಕರಣ ಹೊಸತನವಿದೆ ಎನಿಸಿತು. ಇಡೀ ಚಿತ್ರವನ್ನು ಪ್ರೆಸೆಂಟ್ ಮಾಡಿರುವ ರೀತಿ ಬಗ್ಗೆ ಮೆಚ್ಚುಗೆ ಮೂಡಿತು. ಇವೆಲ್ಲದರ ಜೊತೆಗೆ ಕಥೆಯ ಹೂರಣ ಕೂಡ ವಿಭಿನ್ನವಾಗಿದೆ. ಫ್ಲಾಷ್ ಬ್ಯಾಕಿನ ಮೂಲಕ ಇಡೀ ಸ್ಟೋರಿಯನ್ನು ಕಥಾ ನಾಯಕ ನಿರೂಪಿಸುತ್ತಾ ಹೋಗುತ್ತಾನೆ. ಕಥಾ ನಾಯಕ ಕಾರ್ತಿಕ್ (ಸಿಂಬರಸನ್) ಇಂಜಿನಿಯರ್. ಆದರೀತನಿಗೆ ಸಿನೆಮಾ ಬಗ್ಗೆ ತೀವ್ರ ಆಸಕ್ತಿ. ಸ್ನೇಹಿತರ ಮೂಲಕ ಪರಿಚಯವಾದ  ಸಿನಿಮಾ ಕ್ಯಾಮರಾಮನ್ ಗಣೇಶ್(ಗಣೇಶ್) ತಮ್ಮ ಪ್ರಭಾವ ಬಳಸಿ ಖ್ಯಾತ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಸೇರಿಸುತ್ತಾರೆ. ಒಮ್ಮೆ ತಾವಿರುವ ಬಾಡಿಗೆ ಮನೆ ಗೇಟಿನ ಬಳಿ ಕಾರ್ತೀಕ್ ನಿಂತಿದ್ದಾಗ ಸೀರೆಯುಟ್ಟ ಯುವತಿಯೋರ್ವಳು ತೀರಾ ಬೇಗವೂ ಅಲ್ಲದ ನಿಧಾನವೂ ಅಲ್ಲದ ರೀತಿ ನಡೆದು ಬರುತ್ತಿರುವುದನ್ನು ನೋಡುತ್ತಾನೆ. ನೋಡುತ್ತಾ ನೋಡುತ್ತಾ ಈತನ ಕಣ್ಣುಗಳಲ್ಲಿ ಮಿಂಚು. 'love at first sight' ಭಾವನೆ. ಆಕೆ ಗೇಟ್ ತೆರೆದು ಈತನಿರುವ ಮನೆಯ ಮೊದಲ ಮಹಡಿಗೆ ತೆರಳುತ್ತಾನೆ. ಬಳಿಕ ಈತನ ಸಹೋದರಿ ಮೂಲಕ ಆಕೆ, ಮಲೆಯಾಳಿ ಮನೆ ಮಾಲೀಕರ ಮಗಳು ಜೆಸ್ಸಿ (ತ್ರಿಷಾ) ಎನ್ನುವುದು ತಿಳಿದು ಬರುತ್ತದೆ. ...

ಮಾತುಗಳಿಗಿಂತ ಸ್ಫೋಟಕ ಮತ್ಯಾವುದಿದೆ ?

ಒಮ್ಮೊಮ್ಮೆ ಕನ್ನಡ ಕಥೆಗಾರರ ಒಂದಷ್ಟು ಕಥೆಗಳು ನನ್ನ ಕಣ್ತಪ್ಪಿಸಿಕೊಂಡಿರುತ್ತವೆ. ಆಗ ಬಹುಮುಖ್ಯ ಕಥೆಗಳನ್ನೆಲ್ಲ ಓದಿದ್ದೀನಿ ಎಂಬ ಅಹಂ ಬಲೂನ್ ಟಪ್ಪನೆ ಒಡೆಯುತ್ತದೆ. ಪತ್ರಕರ್ತ ಎನ್.ಎಸ್. ಶಂಕರ್ ಅವರು ‘ಲಂಕೇಶ್ ಪತ್ರಿಕೆ” ಯಲ್ಲಿ ಬರೆದ ಲೇಖನಗಳನ್ನು ಓದಿದ್ದೆ. ಆದರೆ ಕಥೆಗಳನ್ನು ಓದಿರಲಿಲ್ಲ. ಇತ್ತೀಚೆಗೆ ಅವರ ‘ರೂಢಿ’ ಕಥಾ ಸಂಕಲನ ಸಿಕ್ಕಿತು. ಓದಿದೆ. ಗಾಢವಾಗಿ ತಟ್ಟಿತು. ಇಷ್ಟು ಅರ್ಥಪೂರ್ಣ ಕಥೆಗಳನ್ನು ಓದಿರಲಿಲ್ಲವಲ್ಲ ಎನಿಸಿತು. ರೂಢಿ ಮತ್ತಿತರ ಕಥೆಗಳಲ್ಲಿ ಎರಡು ಭಾಗಗಳಿವೆ. ಒಂದನೇ ಭಾಗದಲ್ಲಿ ಶಂಕರ್ ಅವರೇ ಬರೆದ ಕಥೆಗಳು. ಎರಡನೇ ಭಾಗದಲ್ಲಿ ಅನುವಾದಿಸಿದ ಕಥೆಗಳಿವೆ. ಮೊದಲನೇಯದರಲ್ಲಿ ಕೆಟ್ಟಕಾಲ, ರೂಢಿ, ರತಿ, ಆಡಿದ ಮಾತು, ಅನುಭವ ಮಂಟಪ, ಒಂದು ತನಿಖಾ ಪ್ರಸಂಗ ಮತ್ತು ಮೂರ್ನಾಡು ತೀರದಲ್ಲಿ ಇವೆ. ಹಿರಿಯರು ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೊಯ್ತು’ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು’ ಇತ್ಯಾದಿ ಅರ್ಥಪೂರ್ಣ ನುಡಿ, ಗಾದೆ ಹೇಳುತ್ತಲೇ ಇರುತ್ತಾರೆ. ಅವುಗಳನ್ನೆಲ್ಲ ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿ ಮೂಲಕ ಆಚೆ ದಾಟಿಸಿರುತ್ತೇವೆ. ‘ಕೆಟ್ಟಕಾಲ’ ಕಥೆ ಮಾತಿನೊಳಗೆ ಅಡಗಿರುವ ಸ್ಫೋಟಕತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಈ ಕಥೆ ಓದಿದರೆ ಒಂದು ಮಾತನ್ನು ಬಾಯಿಂದ ದಾಟಿಸುವ ಮೊದಲು ನೂರು ಬಾರಿ ಯೋಚಿಸುತ್ತೇವೆ ಎಂದರೆ ಕಥೆಯ ಗಹನತೆ ಅರ್ಥವಾಗಬಹುದು. ...

Earth's Frozen Regions and Global Warming - Documentary